ಸಾಹಿತಿ ಗೊರೂರು ಅನಂತರಾಜುರವರು ಬರೆದಿರುವ ಪುಸ್ತಕ
ಸವಿದಷ್ಟು ಸವಿಯಾದ ಅನುಭವಾಮೃತದ ಸೇವಾಮೃತ ಕೃತಿ ವಿಮರ್ಶೆ
ಕನ್ನಡ ಸಾಹಿತ್ಯ, ವಿಮರ್ಶೆ ಮತ್ತು ರಂಗ ಕಲಾ ಲೋಕದ ಅಪೂರ್ವ ಪ್ರತಿಭೆ ಗೊರೂರು ಅನಂತರಾಜ್, ಇವರ ಅನುಭವಾಮೃತ ಸೇವಾಮೃತ ಕೃತಿಯಲ್ಲಿ ಒಟ್ಟು ಇಪ್ಪಾತ್ತಾರು ವಿಮರ್ಶ ಲೇಖನಗಳು ಮತ್ತು ಇವರ ಕೃತಿಗಳಿಗೆ ಇತರ ಲೇಖಕರು ಬರೆದ ಆರು ವಿಮರ್ಶ ಲೇಖನಗಳು ಕೂಡ ಸೇರ್ಪಡೆಯಾಗಿವೆ. ಇವು ನಿಜಕ್ಕೂ ಅಂತರ್ ಶಿಸ್ತಿಯಾ ಮತ್ತು ಬಹುಶೀಸ್ತಿಯಾ ನೆಲೆಗಳಿಂದ ಕೂಡಿದ್ದು , ವ್ಯವಸ್ಥೆಯ ಅದ್ಬುತ ಗಾಢಪ್ರಜ್ಞೆಯ ಒಳನೋಟವನ್ನು ಕಟ್ಟಿ ಕೊಡುತ್ತವೆ. ಈ ಕೃತಿ ಓದುತ್ತಿದ್ದರೆ ಇದರಲ್ಲಿ ಉಲ್ಲೇಖವಾಗಿರುವ ಲೇಖಕರ ಕೃತಿಗಳನ್ನು ಓದಬೇಕು ಎನ್ನುವ ತುಡಿತ ಉಂಟಾಗುತ್ತದೆ. ಇಲ್ಲಿಯ ಲೇಖನಗಳು ಒಂದು ರೀತಿಯ ತೌಲನಿಕ ಆಯಾಮಗಳಿಂದ ಕೊಡಿದ್ದು ಅತಿ ಸರಳವಾಗಿ ಓದಿಸಿಕೊಂಡು ಹೋಗುವ ಸಾಂಸ್ಕೃತಿಕ ಲೋಕವನ್ನು ಪ್ರವೇಶಿಸಿಸುವಂತೆ ಮಾಡುತ್ತವೆ. ವಿವಿಧ ಸಾಹಿತ್ಯ ಪ್ರಕಾರಗಳ ಮೂಲಕ ಕಂಡುಕೊಂಡಿರುವ ಪರಿಪಕ್ವ ವಾದ ಪೌಷ್ಟಿಕ ದೇಸಿ ತಳಿಗಳಲ್ಲಿ ನಾಟಕವು ಕೂಡ ಒಂದು ಎಂಬುದನ್ನು ಪ್ರತಿಪಾದಿಸುತ್ತಾರೆ.
ಹಾಸ್ಯದ ಮನೋಭಾವದ ಸದಾ ನಗುಮೊಗದ ಮಗುವಿನ ಮುಗ್ಧ ಮನಸ್ಸಿನ ಗೊರೂರು ಅನಂತರಾಜ್ ಸ್ಥಳೀಯ ಬೀಚಿಯಂತಯೇ ಎಂದು ಅವರ ಆಪ್ತ ವಲಯ ಅಭಿಮಾನಿಸುತ್ತದೆ . ಅಂತರಂಗದ ಶ್ರೀಮಂತಿಕೆಯಲ್ಲಿ ಹಾಗೂ ಪರಸ್ಪರರನ್ನು ಗೌರವಿಸುವುದರಲ್ಲಿ ಜನ ಸಾಮಾನ್ಯರ ಜೊತೆ ಬೆರೆಯುವುದರಲ್ಲಿ ವ್ಯಕ್ತಿ ಸರಳವಾದಷ್ಟು ಎತ್ತರಕ್ಕೆ ಹೇಗೆ ಏರುತ್ತಾನೆಂಬುದು ಈ ಲೇಖನಗಳಿಂದ ಸಾಬಿತು ಪಡಿಸುತ್ತಾರೆ. ಅವರ ಅಭಿಪ್ರಾಯ ಮತ್ತು ಗ್ರಹಿಕೆಗಳನ್ನು ಈ ಕೃತಿಯಲ್ಲಿ ತಾತ್ವಿಕವಾಗಿ ದಾಖಲಿಸುತ್ತ ಸಾಗುವ ಅವರ ಬರವಣಿಗೆಯ ಶೈಲಿ "ಪಿಸುದನಿಯಂತೆ ಕಚಗುಳಿ ಇಡುತ್ತದೆ.ಕೆಲವು ಅಪಸ್ವರಗಳನ್ನು ಮುಟ್ಟಿಸಿಕೊಳ್ಳದಂತೆ ಸ್ಪರ್ಶಿಸಿ ನೈಜತೆ ಕಟ್ಟಿಕೊಟ್ಟ" ಅನಂತರಾಜ್ ಅವರ ಅಂತರಾಳದ ಸಮಷ್ಠಿಯಲ್ಲಿ ಅಂತರಗಂಗೆ ಹರಿಯುತ್ತಲೆ ಇದೆ.ಅದನ್ನವರು ಈ ಲೇಖನಗಳ ಮೂಲಕ ಸೂಕ್ಷ್ಮವಾಗಿ ಚಿಂತಿಸಿದ್ದಾರೆ ತಾರ್ಕಿಕವಾಗಿಯೂ ಭಾವುಕರಾಗಿಯೂ ಬರೆಯಬಲ್ಲ ಸರಳವೂ ಗಹನವೂ ಆಗಿರುವ ಬರಹಗಳು ಓದುಗನ ದೃಷ್ಟಿಯನ್ನು ಹಾಸ್ಯದ ಮೂಲಕ ಹಿಡಿದು ಕಟ್ಟಿಹಾಕುವ ಇವರು ಈ ಸಂಕಲನದಲ್ಲಿ ಹಾಸ್ಯ, ವಿಡಂಬನೆ ,ಮುಗ್ಧತೆ, ಚಾತುರ್ಯಾ, ತಂತ್ರ ಪ್ರತಿತಂತ್ರ, ಸವಾಲು ಇಷ್ಟೇ ಅಲ್ಲದೆ ವೈವಿಧ್ಯಮಯ ಭಾವಗಳಲ್ಲಿಯೂ ಮೈದಾಳಿವೆ.
ಚಿಂತಕ ಎಚ್.ಗಂಗಾಧರನ್ ಅವರ ಅನುಭವಾಮೃತ, ನಾಟಿ ವೈದ್ಯ ಸಿ.ಪ್ರಶಾಂತ್ ಬಾಗಡೆ ಅವರ ಸೇವಾಮೃತ , ಷೇಕ್ಸಪಿಯರ್ನ ಕಿಂಗ್ ಲಯರ್ ಕನ್ನಡಕ್ಕೆ ಪ್ರೊ.ಕೆ ಎಸ್ ಭಗವಾನ್,ಅಣ್ಣಾಜ ಪ್ಪ ಗುಂಜೆವು ಇವರ ಹೊಳೆನರಸೀಪುರ ತಾಲ್ಲೂಕು ಇತಿಹಾಸ , ಎಸ್ ಪ್ರಕಾಶ್ ಅವರ ಬೆಳ್ಳಿ ಮೋಡದ ಅಂಚಿನಿಂದ - ಪುಟ್ಟಣ್ಣ ಕಣಗಾಲ್ ಸಿನಿಮಾ ಪಯಣ, ಕೊಪ್ಪ ಜಗದೀಶ್ ಅವರ - ಮರುಭೂಮಿಯ ಹೂ - ವಾರಿಸ್ ಡೆರಿಸ್ ಆತ್ಮಕಥನ ,ಕವಿತಾ ರೈ-ಅವರ ಲೋಪಾ ಮುದ್ರಾ ಕಾವೇರಿ ನದಿಯ ಜನ್ಮಪುರಾಣ , ಕನ್ನಡ ಕುವರ - ಸಿವಿ ಶಿವಶಂಕರ ಸಿನಿಮಾ ಸಾಹಸ,ಮಿರ್ಲೆ ಚಂದ್ರಶೇಖರ್ ಅವರ - ಧರೆ ಹತ್ತ ಉರಿದೊಡೆ , ಗೊರೂರು ನೀವೇಶ್ ಅವರ - ಎದೆಯೊಳಗಿನ ಹಾಡು , ಬೇಲೂರು ನವಾಬ್ ಅವರ - ಮನದಾಳದ ಮಾತು, ಲಕ್ಷ್ಮಣ ಬಳೋಟಗಿಯವರ ವಚನ ಚಂದ್ರಿಕೆ,ಡಾ. ವಿಶ್ವನಾಥ್ ಅವರ ಪಗಡೆ ಪರಿಕಲ್ಪನೆ ,ಎಲ್ ಎನ್ ಮುಕುಂದ ರಾಜ್ ಅವರ ಕವಿತೆ ಹದ್ದು ಮತ್ತು ಜೀಮೂತ , ಗಿರಿ ಮನೆ ಶ್ಯಾಮ್ ರಾವ್ ಅವರ ಸುಖ ಯಾರ ಸ್ವತ್ತು ? , ಎನ್ ಗಂಗಾಧರ - ಅವರ ನಿನ್ನ ಕಂಗಳ ಬಿಸಿಯ ಹನಿಗಳು,ಎರಡು ಸಂಯುಕ್ತ ಸಂಕಲನಗಳು , ಶ್ರೀನಾಥ್ ನಾಗೇಶ ತೇಜವಾಡ್ಕರ್ ಅವರ ತುಂಟ ಶೀನನ ತ್ರಪದಿ,ಎಚ್ ಬಿ ರಮೇಶ್ ಅವರ ಡಾ. ಎಸ್ ಕೆ ಕರೀಂಖಾನ್ ,ಜವರನಹಳ್ಳಿ ಸಿದ್ದಪ್ಪ ಅವರ ಗಿಲ್ಗ ಮಿಷ್ ,ಎನ್ ಶೈಲಜಾಹಾಸನ್ ಅವರ ಹಿಂದಿನ ಬೆಂಚಿನ ಹುಡುಗಿಯರು , ಕೊಟ್ರೇಶ್ ಎಸ್ ಉಪ್ಪಾರ್ ಅವರ ವಚನಾ ದೀಪಿಕಾ ,ಡಾ.ಮಳಲಿ ವಸಂತ್ ಕುಮಾರ್ ಅವರ ಕಚ ಸಂಜೀವಿನಿ , ಲಲಿತ ಎಸ್ ಅವರ ಪ್ರಕೃತಿ ಪ್ರೇಮದ ಅಭಿವ್ಯಕ್ತಿ, ಪಂಪನ ನೆತ್ತಮನಾಡಿ ಪ್ರಸಂಗ ದಾಳ ಭಾಗ 2, ಮುಖಾಮುಖಿ ಕವನ ಸಂಕಲನ ಎರಡು ವಿಮರ್ಶೆಗಳು, ಹಬ್ಬಗಳು ಜನಪದರ ನಂಬಿಕೆಗಳು ಎರಡು ಅನಿಸಿಕೆಗಳು,ಡಾ.ಗೊರೂರು ಮತ್ತು ಇತರೆ ಲೇಖನಗಳು ,ರಂಗಾಂತರಂಗ ನಾಟಕ ವಿಮರ್ಶೆಯ ಅಂಕಣ ಬರಹ , ಹಗಲು ಕನಸಿನಲ್ಲಿ ಕಟ್ಟಿದಾ ಮನೆಯೊಳಗೆ , ಹೀಗೆ ಸ್ಥಳೀಯ ಸಾಹಿತಿಗಳು ಮತ್ತು ಹೊರಗಿನವರ ಕೃತಿಗಳ ವಿಮರ್ಶೆಗೊಂದು ಕಿರು ವಿಮರ್ಶೆ ಈ ಕೃತಿಯಲ್ಲಿವೆ. ಹಿರಿಯ ಸಾಹಿತಿಯಾದ ಲಲಿತ ಎಸ್ ಅವರ ನನ್ನ ಅನಿಸಿಕೆ ಎಂಬ ಮುನ್ನುಡಿಯೂ ಇಲ್ಲಿ ಪ್ರಧಾನವಾಗಿದೆ. ಪ್ರತಿ ಅಧ್ಯಾಯದಲ್ಲಿಯೂ ನವ್ಯತೆ, ವಿಧಾನ, ತತ್ವ, ವಿಶ್ಲೇಷಣೆ, ಸಂಘಟನೆ, ನಿರೂಪಣೆ ಅಲ್ಲದೆ ವಿನ್ಯಾಸ ಎಲ್ಲವೂ ಹೊಸತು!
ಎಲ್ಲಾ ಮಿತಿಗಳನ್ನು ಮೀರಿಯೂ ಈ ಲೇಖನಗಳೊಂದಿಗಿನ ಲೇಖಕನ ಅನುಸಂಧಾನದ ಅನುಭವಗಳನ್ನು ಇಲ್ಲಿ ಹಿಡಿದಿಡುವ ಪ್ರಯತ್ನವನ್ನು ಕೃತಿಕಾರರು ಅಚ್ಚುಕಟ್ಟಾಗಿ ಮಾಡಿದ್ದಾರೆ.ಲೇಖನಗಳಲ್ಲಿ ಸಹೃದಯ ಓದುಗರಿಗೆ ಬರುವ ಸಾಂಸ್ಕೃತಿಕ ಭಿನ್ನತೆ ಇರುವ ಅಂಶಗಳು ಕುರಿತು ತಲಸ್ಪರ್ಶಿ ಮಾಹಿತಿಯ ಜೊತೆಗೆ ಹಲವು ಧ್ವನಿ ಅರ್ಥಗಳನ್ನು ಸ್ಪುರಿಸುತ್ತದೆ. ಒಂದೊಂದು ಲೇಖನಗಳು ಒಂದುಕ್ಕಿಂತ ಒಂದು ಭಿನ್ನವಾಗಿವೆ. ಲೇಖನಗಳ ವಿಷಯ ವಸ್ತು ಅಚ್ಚರಿ ಹುಟ್ಟಿಸುತ್ತ
"ಸಂಪ್ರದಾಯದ ಸೆರಗು ಸರಿಸಿ ಪೂರ್ವ ಗ್ರಹಗಳ ಮುಸುಕೆಳೆದು ವೈಚಾರಿಕ ಬರಹ ಸಂಗ್ರಹ" ಮಾಡಿ ವಿಚಾರ ಒಡನಾಟ ಮಾತುಕತೆ ಮುನ್ನುಡಿ ಸ್ಪಂದನ ಬಿಡಿ ಬರಹಗಳು ಸೇರಿದಂತೆ ಇದರಲ್ಲಿ ನವ, ಯುವ, ಹಿರಿಯ, ಕವಿತೆ, ಆಶಯ, ಭಾವಾಭಿವ್ಯಕ್ತಿಯ ಪರಿಚಯವೂ ಇದೆ. "ತರ್ಕವಾದಗಳ ಪರಿಧಿಯಿಂದ ಆಚೆ ನಿಂತು ಕಂಡುಂಡ ಜೀವಾನನುಭವಗಳನ್ನೇ ವಸ್ತುವಾಗಿಸಿ ಬರೆದ ಇಲ್ಲಿನ ಬರಹಗಳು ಓದುಗರಿಗೆ ಆಪ್ತವಾಗುತ್ತದೆ.
ಸ್ಫೂರ್ತಿದಾಯಕ ಪ್ರೇರಣಾದಾಯಕ ಬರಹಗಳ ಸಂಕಲನಗಳ ಸರಣಿ ನೀತಿಯನ್ನು ಶುಷ್ಕವಾದ ಭೋಧನೆಯ ಮೂಲಕ ಹೇಳುವುದಕ್ಕಿಂತ ಕಥಾರೂಪದಲ್ಲಿ ಸ್ವಾರಸ್ಯಕರವಾಗಿ ಆಕರ್ಷಕವಾಗಿ ವಿವರಿಸಿವುದರಲ್ಲಿ ಈ ಕೃತಿ ಮುನ್ನೇಲೆಗೆ ಬರುವುದರಲ್ಲಿ ಎರಡು ಮಾತಿಲ್ಲ" ಆಧುನಿಕ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಆಧ್ಯಾತ್ಮಿಕ ಚರ್ಚೆ ಚಿಂತನೆಯಿಂದ ಹೊಮ್ಮುವ ಹೊಸ ನೋಟಗಳನ್ನು ಈ ಕೃತಿ ಹೇಳುತ್ತದೆ ಧರ್ಮ ವರ್ಣಗಳ ಜೀವನ ದರ್ಶನ ಹೇಳುವ ಇದು ಇಲ್ಲಿನ ಸಾಂಸ್ಕೃತಿಕ ಪರಂಪರೆಯೊಡನೆ ತಾದಾತ್ಮ ಸಿದ್ದಿಸಿಕೊಂಡ ಸಾರ್ವಜನಿಕ ಜೀವನದ ವ್ಯಕ್ತಿ ತಮ್ಮನ್ನು ಸಾಹಿತ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡು ವಿಲೀನಗೊಂಡ ವಸ್ತು ಈ ಕೃತಿಯಲ್ಲಿ ಉಲ್ಲೇಖತವಾಗಿದೆ. ತಾನೂ ಪ್ರೀತಿಸಿ ಜನರನ್ನು ಪ್ರೀತಿಸುವಂತೆ ಕೊಡೂಗೆಯ ಆಗಿರುವ ಸಂಪನ್ನ ಸಹೃದಯರ 26 ಲೇಖಕರನ್ನು ಇಲ್ಲಿ ಅವರ ಕೃತಿಯ ಮೂಲಕ ಆನಾವರಣ ಗೊಳಿಸಿದ್ದಾರೆ."ಬರಹಕ್ಕೆ ನೋವು ಮರೆಸುವ ಶಕ್ತಿ ಗುಣ ಇದೆ ಅದು ನೋವೊ ಸಂಕಟವೊ ತವಕವೊ ತಲ್ಲಣವೊ ಸಂಭ್ರಮವೊ ಸೂತಕವೊ ಒಟ್ಟಾರೆ ತನ್ನೊಳಗಿನ ತುಡಿತ ಮಿಡಿತ ಕಂಡ ಕಲ್ಪನೆ ಸಂಗತಿಗಳನ್ನು ಹೆತ್ತು ಹಗುರಾಗುವ ಸಹಜ ಜೀವಿಯ ಆಯಾಮವು ಹೌದು". ಸೋತ ಕಣ್ಣಗಳು ಮೀಟಿಕಿಸುವ ನವಿರು ಚಿತ್ರಣ ನಮ್ಮೊಳಗಿನ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ವರ್ತಮಾನದ ಸಾಂದರ್ಭಿಕತೆಯನ್ನೂ ಸೌಂದರ್ಯ ಒಳಗೊಂಡಿವೆ. "ತಾಜ ಅನುಭವ ವೈಚಾರಿಕ ಸಿರಿಯ ಅನುಭವಗಳ ಒಟ್ಟಂದ ಹೆಚ್ಚಿಸಿ ಇದು ಓದುಗರನ್ನು ಬೇರೆಯದೆ ಚಿಂತನೆಗೆ ಹಚ್ಚುತ್ತದೆ".
- ಶಾಂತ ಅತ್ನಿ
ಹಾಸನ
9449462769
ಹಾಸ್ಯದ ಮನೋಭಾವದ ಸದಾ ನಗುಮೊಗದ ಮಗುವಿನ ಮುಗ್ಧ ಮನಸ್ಸಿನ ಗೊರೂರು ಅನಂತರಾಜ್ ಸ್ಥಳೀಯ ಬೀಚಿಯಂತಯೇ ಎಂದು ಅವರ ಆಪ್ತ ವಲಯ ಅಭಿಮಾನಿಸುತ್ತದೆ . ಅಂತರಂಗದ ಶ್ರೀಮಂತಿಕೆಯಲ್ಲಿ ಹಾಗೂ ಪರಸ್ಪರರನ್ನು ಗೌರವಿಸುವುದರಲ್ಲಿ ಜನ ಸಾಮಾನ್ಯರ ಜೊತೆ ಬೆರೆಯುವುದರಲ್ಲಿ ವ್ಯಕ್ತಿ ಸರಳವಾದಷ್ಟು ಎತ್ತರಕ್ಕೆ ಹೇಗೆ ಏರುತ್ತಾನೆಂಬುದು ಈ ಲೇಖನಗಳಿಂದ ಸಾಬಿತು ಪಡಿಸುತ್ತಾರೆ. ಅವರ ಅಭಿಪ್ರಾಯ ಮತ್ತು ಗ್ರಹಿಕೆಗಳನ್ನು ಈ ಕೃತಿಯಲ್ಲಿ ತಾತ್ವಿಕವಾಗಿ ದಾಖಲಿಸುತ್ತ ಸಾಗುವ ಅವರ ಬರವಣಿಗೆಯ ಶೈಲಿ "ಪಿಸುದನಿಯಂತೆ ಕಚಗುಳಿ ಇಡುತ್ತದೆ.ಕೆಲವು ಅಪಸ್ವರಗಳನ್ನು ಮುಟ್ಟಿಸಿಕೊಳ್ಳದಂತೆ ಸ್ಪರ್ಶಿಸಿ ನೈಜತೆ ಕಟ್ಟಿಕೊಟ್ಟ" ಅನಂತರಾಜ್ ಅವರ ಅಂತರಾಳದ ಸಮಷ್ಠಿಯಲ್ಲಿ ಅಂತರಗಂಗೆ ಹರಿಯುತ್ತಲೆ ಇದೆ.ಅದನ್ನವರು ಈ ಲೇಖನಗಳ ಮೂಲಕ ಸೂಕ್ಷ್ಮವಾಗಿ ಚಿಂತಿಸಿದ್ದಾರೆ ತಾರ್ಕಿಕವಾಗಿಯೂ ಭಾವುಕರಾಗಿಯೂ ಬರೆಯಬಲ್ಲ ಸರಳವೂ ಗಹನವೂ ಆಗಿರುವ ಬರಹಗಳು ಓದುಗನ ದೃಷ್ಟಿಯನ್ನು ಹಾಸ್ಯದ ಮೂಲಕ ಹಿಡಿದು ಕಟ್ಟಿಹಾಕುವ ಇವರು ಈ ಸಂಕಲನದಲ್ಲಿ ಹಾಸ್ಯ, ವಿಡಂಬನೆ ,ಮುಗ್ಧತೆ, ಚಾತುರ್ಯಾ, ತಂತ್ರ ಪ್ರತಿತಂತ್ರ, ಸವಾಲು ಇಷ್ಟೇ ಅಲ್ಲದೆ ವೈವಿಧ್ಯಮಯ ಭಾವಗಳಲ್ಲಿಯೂ ಮೈದಾಳಿವೆ.
ಚಿಂತಕ ಎಚ್.ಗಂಗಾಧರನ್ ಅವರ ಅನುಭವಾಮೃತ, ನಾಟಿ ವೈದ್ಯ ಸಿ.ಪ್ರಶಾಂತ್ ಬಾಗಡೆ ಅವರ ಸೇವಾಮೃತ , ಷೇಕ್ಸಪಿಯರ್ನ ಕಿಂಗ್ ಲಯರ್ ಕನ್ನಡಕ್ಕೆ ಪ್ರೊ.ಕೆ ಎಸ್ ಭಗವಾನ್,ಅಣ್ಣಾಜ ಪ್ಪ ಗುಂಜೆವು ಇವರ ಹೊಳೆನರಸೀಪುರ ತಾಲ್ಲೂಕು ಇತಿಹಾಸ , ಎಸ್ ಪ್ರಕಾಶ್ ಅವರ ಬೆಳ್ಳಿ ಮೋಡದ ಅಂಚಿನಿಂದ - ಪುಟ್ಟಣ್ಣ ಕಣಗಾಲ್ ಸಿನಿಮಾ ಪಯಣ, ಕೊಪ್ಪ ಜಗದೀಶ್ ಅವರ - ಮರುಭೂಮಿಯ ಹೂ - ವಾರಿಸ್ ಡೆರಿಸ್ ಆತ್ಮಕಥನ ,ಕವಿತಾ ರೈ-ಅವರ ಲೋಪಾ ಮುದ್ರಾ ಕಾವೇರಿ ನದಿಯ ಜನ್ಮಪುರಾಣ , ಕನ್ನಡ ಕುವರ - ಸಿವಿ ಶಿವಶಂಕರ ಸಿನಿಮಾ ಸಾಹಸ,ಮಿರ್ಲೆ ಚಂದ್ರಶೇಖರ್ ಅವರ - ಧರೆ ಹತ್ತ ಉರಿದೊಡೆ , ಗೊರೂರು ನೀವೇಶ್ ಅವರ - ಎದೆಯೊಳಗಿನ ಹಾಡು , ಬೇಲೂರು ನವಾಬ್ ಅವರ - ಮನದಾಳದ ಮಾತು, ಲಕ್ಷ್ಮಣ ಬಳೋಟಗಿಯವರ ವಚನ ಚಂದ್ರಿಕೆ,ಡಾ. ವಿಶ್ವನಾಥ್ ಅವರ ಪಗಡೆ ಪರಿಕಲ್ಪನೆ ,ಎಲ್ ಎನ್ ಮುಕುಂದ ರಾಜ್ ಅವರ ಕವಿತೆ ಹದ್ದು ಮತ್ತು ಜೀಮೂತ , ಗಿರಿ ಮನೆ ಶ್ಯಾಮ್ ರಾವ್ ಅವರ ಸುಖ ಯಾರ ಸ್ವತ್ತು ? , ಎನ್ ಗಂಗಾಧರ - ಅವರ ನಿನ್ನ ಕಂಗಳ ಬಿಸಿಯ ಹನಿಗಳು,ಎರಡು ಸಂಯುಕ್ತ ಸಂಕಲನಗಳು , ಶ್ರೀನಾಥ್ ನಾಗೇಶ ತೇಜವಾಡ್ಕರ್ ಅವರ ತುಂಟ ಶೀನನ ತ್ರಪದಿ,ಎಚ್ ಬಿ ರಮೇಶ್ ಅವರ ಡಾ. ಎಸ್ ಕೆ ಕರೀಂಖಾನ್ ,ಜವರನಹಳ್ಳಿ ಸಿದ್ದಪ್ಪ ಅವರ ಗಿಲ್ಗ ಮಿಷ್ ,ಎನ್ ಶೈಲಜಾಹಾಸನ್ ಅವರ ಹಿಂದಿನ ಬೆಂಚಿನ ಹುಡುಗಿಯರು , ಕೊಟ್ರೇಶ್ ಎಸ್ ಉಪ್ಪಾರ್ ಅವರ ವಚನಾ ದೀಪಿಕಾ ,ಡಾ.ಮಳಲಿ ವಸಂತ್ ಕುಮಾರ್ ಅವರ ಕಚ ಸಂಜೀವಿನಿ , ಲಲಿತ ಎಸ್ ಅವರ ಪ್ರಕೃತಿ ಪ್ರೇಮದ ಅಭಿವ್ಯಕ್ತಿ, ಪಂಪನ ನೆತ್ತಮನಾಡಿ ಪ್ರಸಂಗ ದಾಳ ಭಾಗ 2, ಮುಖಾಮುಖಿ ಕವನ ಸಂಕಲನ ಎರಡು ವಿಮರ್ಶೆಗಳು, ಹಬ್ಬಗಳು ಜನಪದರ ನಂಬಿಕೆಗಳು ಎರಡು ಅನಿಸಿಕೆಗಳು,ಡಾ.ಗೊರೂರು ಮತ್ತು ಇತರೆ ಲೇಖನಗಳು ,ರಂಗಾಂತರಂಗ ನಾಟಕ ವಿಮರ್ಶೆಯ ಅಂಕಣ ಬರಹ , ಹಗಲು ಕನಸಿನಲ್ಲಿ ಕಟ್ಟಿದಾ ಮನೆಯೊಳಗೆ , ಹೀಗೆ ಸ್ಥಳೀಯ ಸಾಹಿತಿಗಳು ಮತ್ತು ಹೊರಗಿನವರ ಕೃತಿಗಳ ವಿಮರ್ಶೆಗೊಂದು ಕಿರು ವಿಮರ್ಶೆ ಈ ಕೃತಿಯಲ್ಲಿವೆ. ಹಿರಿಯ ಸಾಹಿತಿಯಾದ ಲಲಿತ ಎಸ್ ಅವರ ನನ್ನ ಅನಿಸಿಕೆ ಎಂಬ ಮುನ್ನುಡಿಯೂ ಇಲ್ಲಿ ಪ್ರಧಾನವಾಗಿದೆ. ಪ್ರತಿ ಅಧ್ಯಾಯದಲ್ಲಿಯೂ ನವ್ಯತೆ, ವಿಧಾನ, ತತ್ವ, ವಿಶ್ಲೇಷಣೆ, ಸಂಘಟನೆ, ನಿರೂಪಣೆ ಅಲ್ಲದೆ ವಿನ್ಯಾಸ ಎಲ್ಲವೂ ಹೊಸತು!
ಎಲ್ಲಾ ಮಿತಿಗಳನ್ನು ಮೀರಿಯೂ ಈ ಲೇಖನಗಳೊಂದಿಗಿನ ಲೇಖಕನ ಅನುಸಂಧಾನದ ಅನುಭವಗಳನ್ನು ಇಲ್ಲಿ ಹಿಡಿದಿಡುವ ಪ್ರಯತ್ನವನ್ನು ಕೃತಿಕಾರರು ಅಚ್ಚುಕಟ್ಟಾಗಿ ಮಾಡಿದ್ದಾರೆ.ಲೇಖನಗಳಲ್ಲಿ ಸಹೃದಯ ಓದುಗರಿಗೆ ಬರುವ ಸಾಂಸ್ಕೃತಿಕ ಭಿನ್ನತೆ ಇರುವ ಅಂಶಗಳು ಕುರಿತು ತಲಸ್ಪರ್ಶಿ ಮಾಹಿತಿಯ ಜೊತೆಗೆ ಹಲವು ಧ್ವನಿ ಅರ್ಥಗಳನ್ನು ಸ್ಪುರಿಸುತ್ತದೆ. ಒಂದೊಂದು ಲೇಖನಗಳು ಒಂದುಕ್ಕಿಂತ ಒಂದು ಭಿನ್ನವಾಗಿವೆ. ಲೇಖನಗಳ ವಿಷಯ ವಸ್ತು ಅಚ್ಚರಿ ಹುಟ್ಟಿಸುತ್ತ
"ಸಂಪ್ರದಾಯದ ಸೆರಗು ಸರಿಸಿ ಪೂರ್ವ ಗ್ರಹಗಳ ಮುಸುಕೆಳೆದು ವೈಚಾರಿಕ ಬರಹ ಸಂಗ್ರಹ" ಮಾಡಿ ವಿಚಾರ ಒಡನಾಟ ಮಾತುಕತೆ ಮುನ್ನುಡಿ ಸ್ಪಂದನ ಬಿಡಿ ಬರಹಗಳು ಸೇರಿದಂತೆ ಇದರಲ್ಲಿ ನವ, ಯುವ, ಹಿರಿಯ, ಕವಿತೆ, ಆಶಯ, ಭಾವಾಭಿವ್ಯಕ್ತಿಯ ಪರಿಚಯವೂ ಇದೆ. "ತರ್ಕವಾದಗಳ ಪರಿಧಿಯಿಂದ ಆಚೆ ನಿಂತು ಕಂಡುಂಡ ಜೀವಾನನುಭವಗಳನ್ನೇ ವಸ್ತುವಾಗಿಸಿ ಬರೆದ ಇಲ್ಲಿನ ಬರಹಗಳು ಓದುಗರಿಗೆ ಆಪ್ತವಾಗುತ್ತದೆ.
ಸ್ಫೂರ್ತಿದಾಯಕ ಪ್ರೇರಣಾದಾಯಕ ಬರಹಗಳ ಸಂಕಲನಗಳ ಸರಣಿ ನೀತಿಯನ್ನು ಶುಷ್ಕವಾದ ಭೋಧನೆಯ ಮೂಲಕ ಹೇಳುವುದಕ್ಕಿಂತ ಕಥಾರೂಪದಲ್ಲಿ ಸ್ವಾರಸ್ಯಕರವಾಗಿ ಆಕರ್ಷಕವಾಗಿ ವಿವರಿಸಿವುದರಲ್ಲಿ ಈ ಕೃತಿ ಮುನ್ನೇಲೆಗೆ ಬರುವುದರಲ್ಲಿ ಎರಡು ಮಾತಿಲ್ಲ" ಆಧುನಿಕ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಆಧ್ಯಾತ್ಮಿಕ ಚರ್ಚೆ ಚಿಂತನೆಯಿಂದ ಹೊಮ್ಮುವ ಹೊಸ ನೋಟಗಳನ್ನು ಈ ಕೃತಿ ಹೇಳುತ್ತದೆ ಧರ್ಮ ವರ್ಣಗಳ ಜೀವನ ದರ್ಶನ ಹೇಳುವ ಇದು ಇಲ್ಲಿನ ಸಾಂಸ್ಕೃತಿಕ ಪರಂಪರೆಯೊಡನೆ ತಾದಾತ್ಮ ಸಿದ್ದಿಸಿಕೊಂಡ ಸಾರ್ವಜನಿಕ ಜೀವನದ ವ್ಯಕ್ತಿ ತಮ್ಮನ್ನು ಸಾಹಿತ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡು ವಿಲೀನಗೊಂಡ ವಸ್ತು ಈ ಕೃತಿಯಲ್ಲಿ ಉಲ್ಲೇಖತವಾಗಿದೆ. ತಾನೂ ಪ್ರೀತಿಸಿ ಜನರನ್ನು ಪ್ರೀತಿಸುವಂತೆ ಕೊಡೂಗೆಯ ಆಗಿರುವ ಸಂಪನ್ನ ಸಹೃದಯರ 26 ಲೇಖಕರನ್ನು ಇಲ್ಲಿ ಅವರ ಕೃತಿಯ ಮೂಲಕ ಆನಾವರಣ ಗೊಳಿಸಿದ್ದಾರೆ."ಬರಹಕ್ಕೆ ನೋವು ಮರೆಸುವ ಶಕ್ತಿ ಗುಣ ಇದೆ ಅದು ನೋವೊ ಸಂಕಟವೊ ತವಕವೊ ತಲ್ಲಣವೊ ಸಂಭ್ರಮವೊ ಸೂತಕವೊ ಒಟ್ಟಾರೆ ತನ್ನೊಳಗಿನ ತುಡಿತ ಮಿಡಿತ ಕಂಡ ಕಲ್ಪನೆ ಸಂಗತಿಗಳನ್ನು ಹೆತ್ತು ಹಗುರಾಗುವ ಸಹಜ ಜೀವಿಯ ಆಯಾಮವು ಹೌದು". ಸೋತ ಕಣ್ಣಗಳು ಮೀಟಿಕಿಸುವ ನವಿರು ಚಿತ್ರಣ ನಮ್ಮೊಳಗಿನ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ವರ್ತಮಾನದ ಸಾಂದರ್ಭಿಕತೆಯನ್ನೂ ಸೌಂದರ್ಯ ಒಳಗೊಂಡಿವೆ. "ತಾಜ ಅನುಭವ ವೈಚಾರಿಕ ಸಿರಿಯ ಅನುಭವಗಳ ಒಟ್ಟಂದ ಹೆಚ್ಚಿಸಿ ಇದು ಓದುಗರನ್ನು ಬೇರೆಯದೆ ಚಿಂತನೆಗೆ ಹಚ್ಚುತ್ತದೆ".
- ಶಾಂತ ಅತ್ನಿ
ಹಾಸನ
9449462769
ಸಾಹಿತಿ ಗೊರೂರು ಅನಂತರಾಜುರವರ ಇತ್ತೀಚಿನ ಕೃತಿ
ಸಾಹಿತಿ ಗೊರೂರು ಅನಂತರಾಜುರವರ ಇತ್ತೀಚಿನ ಕೃತಿ "ಹೇಮೆಯ ಮಡಿಲಲ್ಲಿ" ಕುರಿತು ವಿಮಶೆ೯ ಬರಹ
"ಹೇಮೆಯ ಮಡಿಲಲ್ಲಿ" ಗೊರೂರು ಅನಂತರಾಜು
' ಗೊರೂರು' ಎಂಬ ಹೆಸರು ಕಿವಿಗೆ ಬಿದ್ದ ತಕ್ಷಣ ನಮ್ಮ ಸ್ಮೃತಿಗೆ ಬರುವುದು 'ಹೇಮಾವತಿ ಜಲಾಶಯ' ಮತ್ತು ಖ್ಯಾತ ಸಾಹಿತಿಗಳಾದ 'ರಾಮಸ್ವಾಮಿ ಅಯ್ಯಂಗಾರ್'. ಅನ್ನದಾತರಿಗೆ ಜೀವದಾತೆಯಾಗಿರುವ ಹೇಮಾವತಿ ನದಿಯ ಅಣೆಕಟ್ಟು ನಾಡಿನ ಸುಪ್ರಸಿದ್ಧ ಪ್ರವಾಸಿ ಸ್ಥಳವಾಗಿ ಮಹತ್ವವನ್ನು ಗಳಿಸಿಕೊಂಡಿದ್ದರೆ, ತಮ್ಮ ಮೌಲಿಕವಾದ ಬರಹಗಳಿಂದ ಸಾಹಿತ್ಯ ಪ್ರಿಯರ ಮನಸೂರೆಗೊಂಡು ನಾಡಿನಾದ್ಯಂತ ಮನೆ ಮಾತಾಗಿರುವ ರಾಮಸ್ವಾಮಿ ಅಯ್ಯಂಗಾರ್ 'ಗೊರೂರು' ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯ ಪುಟಗಳಲ್ಲಿ ಚಿರಂತನವಾಗಿಸಿದ್ದಾರೆ. ಹೇಮೆಯ ಪ್ರೇರಣೆಯೋ ಅಯ್ಯಂಗಾರ್ ಅವರ ಸ್ಫೂರ್ತಿಯೋ ಮುಂದಿನ ತಲೆಮಾರಿನ ಬರಹಗಾರರು ಅದೇ ಅನುಕರಣೀಯ ಹಾದಿಯಲ್ಲಿ ಸಾಗುತ್ತಾ 'ಗೊರೂರು' ಹೆಸರನ್ನು ಶಾಶ್ವತವಾಗಿ ಉಳಿಸುವ ಸಾರ್ಥಕತೆಯ ಸನ್ಮಾರ್ಗದಲ್ಲಿ ಮುನ್ನಡೆದಿದ್ದಾರೆ. ಉಲ್ಲೇಖಿಸಬಹುದಾದ ಹೆಸರುಗಳೆಂದರೆ ಗೊರೂರು ಸೋಮಶೇಖರ್, ಗೊರೂರು ಶಿವೇಶ್ , ಗೊರೂರು ನಿಷ್ಕಲ.... ಮುಂತಾದವರ ಪಟ್ಟಿಯಲ್ಲಿ ಸೇರುವ ಮತ್ತೊಂದು ಪ್ರಮುಖ ಹೆಸರು "ಗೊರೂರು ಅನಂತರಾಜು".
ಸುಮಾರು ಮೂವತ್ತೈದು ವರ್ಷಗಳ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ವೈವಿಧ್ಯಮಯ ಪ್ರಕಾರದ ಸಾಹಿತ್ಯದ ಬೆಳೆಗಳನ್ನು ಯಶಸ್ವಿಯಾಗಿ ಬೆಳೆದು ಸಹೃದಯರಿಗೆ ಪ್ರೀತಿಯಿಂದ ಉಣಬಡಿಸುವ ಮೂಲಕ ಸಾಹಿತ್ಯ ಚರಿತ್ರೆಯಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಹಾಸನ ಭಾಗದ ಸಾಹಿತಿಗಳ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನ ಪಡೆದವರಲ್ಲೊಬ್ಬರಾಗಿದ್ದಾರೆ. ೧೯೬೧ ರ ಮೇ ೧೩ ರಂದು ಬಸವರಾಜು ಮತ್ತು ಪುಟ್ಟ ಲಕ್ಷ್ಮಮ್ಮ ದಂಪತಿಗಳ ಪುಣ್ಯ ಗರ್ಭದಲ್ಲಿ ಜನಿಸಿದ ಅನಂತರಾಜು ಅವರು ಹುಟ್ಟೂರಿನ ಹಸಿರು ಸಿರಿ ಸಮೃದ್ಧವಾದ ಪರಿಸರದಲ್ಲಿ ಆಡಿ ಬೆಳೆದವರು. ಸೂಕ್ಷ್ಮ ಗ್ರಾಹಿ ಪ್ರವೃತ್ತಿಯವರಾದ ಇವರು ತಮ್ಮ ಊರಿನ ಜನಜೀವನದ ಅವಲೋಕನದ ಜೊತೆಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು, ಹಳ್ಳಿಗರ ಹವ್ಯಾಸಿ ನಾಟಕಗಳನ್ನು ನೋಡುತ್ತಾ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಾಹಿತ್ಯಾಸಕ್ತಿಯನ್ನು ಮೈಗೂಡಿಸಿಕೊಂಡವರು. ಉತ್ತಮ ಪುಸ್ತಕಗಳನ್ನು ಓದುವ ಅಧ್ಯಯನ ಮಾಡುವ ಮತ್ತು ಆಯಾ ಪುಸ್ತಕಗಳ ಹೂರಣವನ್ನು ತಮ್ಮದೇ ದೃಷ್ಟಿಕೋನದಿಂದ ಪರಾಮರ್ಶಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡ ಪರಿಣಾಮವಾಗಿ ಅನೇಕ ಲೇಖನಗಳನ್ನು ಬರೆಯುವಲ್ಲಿ ಯಶಸ್ಸು ಕಂಡರು. ಜೊತೆಗೆ ನಾಡಿನ ಅನೇಕ ಪ್ರಮುಖ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನೂರಾರು ವೈವಿಧ್ಯಮಯ ಬರಹಗಳನ್ನು ಸಹೃದಯರಿಗೆ ನೀಡಿ ಮನೆ ಮಾತಾದರು. ವಿಶೇಷವಾಗಿ ನಾಟಕ ರಂಗದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಅನಂತರಾಜು ಅವರು ಹಾಸನದ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳುವ ಯಾವುದೇ ಪ್ರಕಾರದ ನಾಟಕವಿದ್ದರೂ ತಪ್ಪದೆ ಹಾಜರಾಗಿ, ತಮ್ಮ ಸೂಕ್ಷ್ಮ ಅವಲೋಕನದಿಂದ ವೀಕ್ಷಿಸುವ ಜೊತೆಗೆ ಪ್ರದರ್ಶನಗೊಂಡ ನಾಟಕ ಮತ್ತು ಪಾತ್ರಧಾರಿಗಳನ್ನು ಕುರಿತು ಲೇಖನವಾಗಿಸಿ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಪ್ರೋತ್ಸಾಹ ತುಂಬುತ್ತಾರೆ. ಅಂತಹ ಉದಾತ್ತ ಮನಸ್ಸಿನ, ಕಾವ್ಯ ಪ್ರಿಯರಾದ ಇವರು
ಇದುವರೆಗೂ ಮೂವತ್ತೈದಕ್ಕಿಂತ ಹೆಚ್ಚು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಗೊರೂರು ಅನಂತರಾಜು ಅವರ ಮೌಲಿಕವಾದ ಕೃತಿಗಳಲ್ಲಿ ಒಂದಾದ "ಹೇಮೆಯ ಮಡಿಲಲ್ಲಿ" ಪುಸ್ತಕವನ್ನು ಕುರಿತಂತೆ ಕಿರು ಲೇಖನವಿದು.
"ಹೇಮೆಯ ಮಡಿಲಲ್ಲಿ" ಗೊರೂರು ಅನಂತರಾಜು ಅವರು ಬರೆದ, ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಂಡ ಒಟ್ಟು ೨೦ ಲೇಖನಗಳು ಅಡಕವಾಗಿವೆ. ಪ್ರತಿ ಲೇಖನವು ವೈವಿಧ್ಯಮಯ ವಿಷಯ ವಸ್ತುವನ್ನು ಹೊಂದಿದ್ದು, ವಿಶೇಷವಾಗಿ ಮಾತೃ ಜಿಲ್ಲೆಯ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ನಾಟಕ, ಜಾನಪದ, ಇತಿಹಾಸ ವೈಶಿಷ್ಟ್ಯತೆ ಮತ್ತು ವ್ಯಕ್ತಿ ಸಾಧನೆ ಮುಂತಾದ ಅನೇಕ ವಸ್ತುಗಳನ್ನು ಹೊಂದಿವೆ. ತಮ್ಮ ಮೊದಲ ಲೇಖನ "ಹೇಮೆಯ ಮಡಿಲಲ್ಲಿ' ಶೀರ್ಷಿಕೆಯನ್ನೇ ಕೃತಿಗೂ ಹೆಸರಿಸುವ ಮೂಲಕ ತಮ್ಮ ಜನ್ಮಭೂಮಿಯನ್ನು ಅತ್ಯಂತ ಪ್ರೀತಿಯಿಂದ ಸ್ಮರಿಸಿಕೊಂಡಿದ್ದಾರೆ. ಇದೇ ಲೇಖನದಲ್ಲಿ ಹೇಮಾವತಿ ನದಿಯ ಉಗಮ, ಅಣೆಕಟ್ಟಿನ ನಿರ್ಮಾಣ, ಅನುಕೂಲತೆ ಪಡೆದಿರುವ ಜಲಾನಯನ ಪ್ರದೇಶದ ವ್ಯಾಪ್ತಿ ಮುಂತಾದ ಅನೇಕ ಮಾಹಿತಿಗಳನ್ನು ಕರಾರುವಕ್ಕಾದ ಅಂಕಿಅಂಶಗಳೊಂದಿಗೆ ವಿವರಿಸಿರುವುದು ಅಧ್ಯಯನ ಪ್ರಿಯರಿಗೆ ಸುಲಭವಾಗಿ ದೊರಕುವ ಸರಕಿನಂತಾಗಿದೆ. ಜೊತೆಗೆ ಗೊರೂರಿನ ಐತಿಹಾಸಿಕ ಕುರುಹುಗಳು, ದೇವಾಲಯಗಳು, ಕೋಟೆಗಳು ಹಾಗೂ ರಾಮಸ್ವಾಮಿ ಅಯ್ಯಂಗಾರ್ ಅವರನ್ನು ಒಳಗೊಂಡಂತೆ ಇಲ್ಲಿನ ಸಾಹಿತ್ಯ ಸಾಧಕರನ್ನು ಸಂಕ್ಷಿಪ್ತವಾಗಿ ಉಲ್ಲೇಖಿಸಿದ್ದಾರೆ.
"ಹಾಸನ ಜಿಲ್ಲೆಯ ಜಾನಪದ ಅಧ್ಯಯನ:ಗುರುಮುಖ" ಲೇಖನದಲ್ಲಿ ಕನ್ನಡ ಪ್ರಾಧ್ಯಾಪಕರೂ, ಖ್ಯಾತ ಜಾನಪದ ವಿದ್ವಾಂಸರೂ ಆದ ಡಾ.ಹಂಪನಹಳ್ಳಿ ತಿಮ್ಮೇಗೌಡರ ಪಿಹೆಚ್ಡಿ ನಿಬಂಧದ ಪ್ರಮುಖ ಅಂಶಗಳನ್ನು ಒಳಗೊಂಡಂತೆ ಹಾಸನ ಭಾಗದ ಜಾನಪದ ಅಂಶಗಳು, ಕಲಾವಿದರು, ಕಲಾಪ್ರಕಾರಗಳೆಲ್ಲವನ್ನೂ ಸಾಂದರ್ಭಿಕವಾದ ಜನಪದ ಗೀತೆಗಳು, ಖ್ಯಾತ ಲೇಖಕರು ಬರೆದ ಜಾನಪದ ಕೃತಿಗಳ ಉಲ್ಲೇಖದೊಂದಿಗೆ ಸಮಗ್ರವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ.
"ಪಂಡಿತ ಸ್ವಾಮಿಗೌಡರ ಸಾಹಿತ್ಯ ಕೊಡುಗೆ" ಲೇಖನದಲ್ಲಿ ಆಲೂರು ತಾಲ್ಲೂಕಿನ ಪೊನ್ನಾಥಪುರ ದಾಸೇಗೌಡನ ಕೊಪ್ಪಲು ಗ್ರಾಮ ಸಂಜಾತ ಸಾಹಿತಿ ಸ್ವಾಮಿಗೌಡರ ಅಮೋಘ ಸಾಹಿತ್ಯಕ ಕೊಡುಗೆಯನ್ನು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ. ೧೯೭೨ ರಲ್ಲಿ ಅವರು ಸಂಪಾದಿಸಿದ ಇವರ 'ಸೋಬಾನೆ ಪದಗಳು' ಹಾಸನ ಜಿಲ್ಲೆಯ ಮೊದಲ ಸೋಬಾನೆ ಪದಗಳ ಸಂಗ್ರಹ ಕೃತಿ ಇದಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಸ್ವಾಮಿಗೌಡರು ಸಂಪಾದಿಸಿದ ಜಾನಪದ ಸಂಪ್ರದಾಯದ ಹಾಡುಗಳ ಬಗ್ಗೆಯೂ ವಿವರಿಸಿದ್ದಾರೆ.
ನಮ್ಮ ನಾಡನ್ನು ಆಳಿದ ಅನೇಕ ರಾಜವಂಶಗಳಲ್ಲಿ ಹಾಸನ ಜಿಲ್ಲೆಯ ಕೀರ್ತಿಯನ್ನು ಅಜರಾಮರಗೊಳಿಸಿದ ಹೊಯ್ಸಳ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ ಸಾಹಿತ್ಯಕ್ಕೆ ನೀಡಿದ ಹಲವಾರು ಕೊಡುಗೆಗಳನ್ನು 'ಹೊಯ್ಸಳ ಕಾಲದ ಸಾಹಿತ್ಯ' ಲೇಖನದಲ್ಲಿ ವಿವರವಾಗಿ ತಿಳಿಸಿಕೊಟ್ಟು ಇತಿಹಾಸ ಪ್ರಿಯರಿಗೆ ಒಳ್ಳೆಯ ಹಿಮ್ಮಾಹಿತಿಯನ್ನು ಒದಗಿಸಿರುವ ಅನಂತರಾಜು ಅವರು ಹೊಯ್ಸಳ ದೊರೆಗಳ ಸಾಹಿತ್ಯದ ಬಗೆಗಿನ ಕಾಳಜಿಯನ್ನು ಓದುಗರಿಗೆ ತಿಳಿಸಿಕೊಟ್ಟಿದ್ದಾರೆ. ಮುಂದೆ ರಾಮನಾಥಪುರ ಬೇಲೂರು ಹಳೇಬೀಡು ಶ್ರವಣಬೆಳಗೊಳ ದಂತದಂತಹ ಶಿಲ್ಪಕಲೆಗಳಿಂದ ಕರ್ನಾಟಕದ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿರುವ ಬಡವರ ಊಟಿ, ಸಿಂಹಾಸನಪುರಿ ಎಂಬ ಅನ್ವರ್ಥಕ ನಾಮ ವಿಶೇಷಣವನ್ನು ಪಡೆದ ಹಸನಾದ 'ಹಾಸನ' ಜಿಲ್ಲೆಯ ವಿವಿಧ ತಾಲ್ಲೂಕುಗಳ ಶಿಲ್ಪ ಕಲಾವೈಭವದ ಸವಿಸ್ಮರಣೆಗಳನ್ನು "ಶಿಲ್ಪಕಲೆಯ ನಾಡಿನಲ್ಲಿ" ಎಂಬ ಲೇಖನದಲ್ಲಿ ನಿರೂಪಿಸಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಹರಿಯುವ ಕಾವೇರಿ, ಹೇಮಾವತಿ, ಯಗಚಿ, ವಾಟೆಹೊಳೆ ನದಿಗಳ ಹರಿವಿನ ವಿಸ್ತಾರ, ಉಪಯೋಗ ಪಡೆಯುತ್ತಿರುವ ಕೃಷಿ ಜಮೀನುಗಳ ವಿಸ್ತೀರ್ಣ, ಕೃಷಿಯೇತರ ಬಳಕೆಯ ಮಾಹಿತಿಗಳೆಲ್ಲವನ್ನು ನಿಖರವಾಗಿ ದಾಖಲಿಸಿದ್ದಾರೆ. ಅಲ್ಲದೆ ಸಂಗೀತ ಪರಂಪರೆಯ ಹಿನ್ನೆಲೆಯಲ್ಲಿ 'ಕರ್ನಾಟಕದ ತಂಜಾವೂರು' ಎಂಬ ಖ್ಯಾತಿಗೆ ಪಾತ್ರವಾಗಿರುವ ಅರಕಲಗೂಡು ತಾಲ್ಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಹುಟ್ಟಿ ಶಾಸ್ತ್ರೀಯ ಸಂಗೀತದ ಸಾಧನೆಯಲ್ಲಿ ಮಹತ್ಸಾಧನೆ ಗೈದಿರುವ ಶತಾವಧಾನಿ ವೆಂಕಟರಮಣಯ್ಯ, ಆರ್. ಕೆ.ಶ್ರೀಕಂಠನ್, ಆರ್. ಕೆ.ತ್ಯಾಗರಾಜನ್, ಆರ್. ಕೆ.ತಾರಾನಾಥನ್, ಆರ್. ಡಾ. ಎನ್. ಶ್ರೀಲತಾ.... ಮುಂತಾದವರ ಸಂಗೀತ ಸೇವೆಯನ್ನು ಸ್ಮರಿಸಿಕೊಂಡಿದ್ದಾರೆ. ಇದೇ ಗ್ರಾಮದಲ್ಲಿ ಸಂಗೀತ ಪರಂಪರೆಯನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿರುವ, ವಿಶ್ವ ವಿಖ್ಯಾತ ಕಲಾಕೃತಿ 'ಸಪ್ತಸ್ವರ ದೇವತಾ ಧ್ಯಾನ ಮಂದಿರ' ಮತ್ತು ಇತ್ತೀಚಿನ 'ದ್ವಾದಶ ಸ್ವರಸ್ತಂಭ ಮಂಟಪ'ದ ನಿರ್ಮಾಣದ ಜೊತೆಗೆ ಪ್ರತಿ ವರ್ಷವೂ 'ಸಂಗೀತೋತ್ಸವ'ವನ್ನು ಯಶಸ್ವಿಯಾಗಿ ನಡೆಸುತ್ತಿರುವ ಗಾನಕಲಾಭೂಷಣ ಡಾ.ಆರ್. ಕೆ.ಪದ್ಮನಾಭ ಅವರನ್ನು ಸ್ಮರಿಸಿಕೊಳ್ಳುವುದು ಅತ್ಯಂತ ಸಮಂಜಸವಾಗುತ್ತದೆ.
ಕರ್ನಾಟಕ ರತ್ನ ಡಾ. ದೇಜಗೌ ಶತಮಾನೋತ್ಸವ ಸಂದರ್ಭದ ಅಭಿನಂದನಾ ಗ್ರಂಥದ ಕೃತಿಯೊಂದರ ಪರಿಚಯ ಲೇಖನವಾಗಿ "ದೇಜಗೌ ನೆನಪಿನಾಳದಲಿ ನಿಂದವರು" ಬರೆಯುವ ಸುವರ್ಣಾವಕಾಶ ಪಡೆದ ಗೊ.ಅನಂತರಾಜು ಅವರು ದೇಜಗೌ ಅವರು ಬರೆದ ವಿವಿಧ ಕ್ಷೇತ್ರಗಳ ಸಾಧಕ ಮಹಿಮರನ್ನು ಕುರಿತ ವ್ಯಕ್ತಿ ಚಿತ್ರಣಗಳ ಲೇಖನಗಳನ್ನು ಕುರಿತು ಸವಿಸ್ತಾರವಾಗಿ ಬರೆದು ಕೃತಾರ್ಥ ಭಾವ ತಳೆದಿದ್ದಾರೆ. ಮುಂದಿನ ಲೇಖನ 'ಜಲಪ್ರಳಯ-ಭಗೀರಥನ ಕತೆ'ಯಲ್ಲಿ ಭಗೀರಥನು ಭೂಲೋಕಕ್ಕೆ ಗಂಗೆಯನ್ನು ಕರೆತರುವ ಪ್ರಸ್ತಾವನೆಯೊಂದಿಗೆ ಹಿಮಾಲಯದ ಪರ್ವತಶ್ರೇಣಿಯಿಂದ ಹರಿಯುವ ನದಿಗಳು, ಅವುಗಳ ಹರಿವಿನ ವಿಸ್ತಾರ ಮತ್ತು ನದೀಪಾತ್ರಗಳಲ್ಲಿರುವ ಪುಣ್ಯ ಕ್ಷೇತ್ರಗಳ ಹಲವಾರು ಮಾಹಿತಿಗಳನ್ನು ಒದಗಿಸಿದ್ದಾರೆ. ಗೊರೂರು ಸೋಮಶೇಖರ್ ಅವರ ಬಡವರ್ಗಗಳು ಒಂದು ಸಂವಾದ ಸೇರಿದಂತೆ ಸಮಾಜದ ಅನೇಕ ಸಮಸ್ಯೆಗಳ, ಪ್ರಶ್ನಾರ್ಥಕ ವಿಷಯಗಳನ್ನು ಒಳಗೊಂಡ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ ಕೃತಿ ಬಸವಣ್ಣನ ಪುರಾತ ದಾಸಿಮಯ್ಯ - ಕೆಳವರ್ಗದ ತಲ್ಲಣಗಳು ಎಂಬ ಲೇಖನವನ್ನು ಕುರಿತು ವಿಮರ್ಶಿಸಿದ್ದಾರೆ.
ಇಂತಹ ಅನೇಕ ಮೌಲಿಕ ಲೇಖನಗಳ ಸಾಹಿತ್ಯ ಸವಿಭರಿತ ಗೊಂಚಲಿನಲ್ಲಿ 'ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ', 'ಬೇಲೂರು ವೈಕುಂಠ ದಾಸರು ಮತ್ತು ಕೆಲ್ಲಂಗೆರೆ ತಿಮ್ಮಪ್ಪದಾಸರು', ಗಾನಕೋಗಿಲೆ- ಎಸ್. ಜಾನಕಿ', 'ಜಾನಪದ ಹಾಡುಗಳಲ್ಲಿ ಕಬ್ಬತ್ತಿರಂಗ- ಭರತೂರು ಬಿಂದಿಗಮ್ಮ', 'ಜನಪದ ಸಾಹಿತ್ಯದಲ್ಲಿ ಮಳಲಿ ಗಿಡ್ಡಮ್ಮ' ಮುಂತಾದ ಮಹಾ ಸಾಧಕರ ಸಾಧನೆಯ ಮಜಲುಗಳನ್ನು ವಿವರವಾಗಿ ಪರಿಚಯಿಸುವ ಮೂಲಕ ಓದುಗರ ಆಸಕ್ತಿಗೆ ಅನುಗುಣವಾದ ಸಾಹಿತ್ಯ ಸೌರಭವನ್ನು ಹಂಚಿದ್ದಾರೆ. ಇವುಗಳ ಜೊತೆಗೆ 'ಹೊಯ್ಸಳ ಚಿತ್ರಕ್ಕೆ ರಿಯಲ್ ಹುಲಿ' ಲೇಖನದಲ್ಲಿ ನಿರ್ದೇಶಕರಾದ ಸಿ.ವಿ.ಶಿವಶಂಕರ್ ಅವರು ಹೊಯ್ಸಳ ಚಿತ್ರದಲ್ಲಿ ಸಳನು ಹುಲಿಯೊಂದಿಗೆ ಹೋರಾಡುವ ದೃಶ್ಯದ ಚಿತ್ರೀಕರಣಕ್ಕಾಗಿ ಮದರಾಸಿನಿಂದ ನಿಜವಾದ ಹುಲಿಯನ್ನು ತರಿಸಿ, ಅನುಭವಿಸಿದ ರೋಮಾಂಚನಕಾರಿ ಪ್ರಸಂಗವನ್ನು ತಿಳಿಸಿದ್ದಾರೆ. ಖ್ಯಾತ ಪತ್ರಕರ್ತರಾದ ನಾಗರಾಜ್ ಹೆತ್ತೂರ್ ಅವರ 'ಮನೆಯಲ್ಲಿ ಅಟ್ಟೆನೆಂದಡೆ ಹೊಟ್ಟೆ ತುಂಬಿದುದುಂಟೆ?' ಲೇಖನವನ್ನು ಕುರಿತು ವಿವರಿಸಿರುವ ಗೊ.ಅನಂತರಾಜು ಅವರು ಪೌರಕಾರ್ಮಿಕ ಪುನೀತ್ ಅವರ ಸೇವೆಯ ಸ್ಮರಣೆಯೊಂದಿಗೆ ನಮ್ಮ ಜನಸಾಮಾನ್ಯರಲ್ಲಿ ಜಡ್ಡುಗಟ್ಟಿರುವ ನೈರ್ಮಲ್ಯದ ನಿಷ್ಕಾಳಜಿ, ಶೌಚಾಲಯ ನಿರ್ವಹಣೆಯ ಬಗೆಗಿನ ಅಲಕ್ಷ್ಯ, ಸುತ್ತ ಮುತ್ತಲಿನ ಪರಿಸರ ಪ್ರಜ್ಞೆಯ ಕೊರತೆಗಳಿಂದಾಗಿ ಪೌರಕಾರ್ಮಿಕರು ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕೆಂಬ ಬಗೆಗಿನ ನಾಗರಾಜ್ ಹೆತ್ತೂರರ ಮಾನವೀಯ ಕಳಕಳಿ ಹಾಗೂ ಸಾಮಾಜಿಕ ಅಸಮಾನತೆಯ ಜಿಜ್ಞಾಸೆಯನ್ನು ಬಿಚ್ಚಿಟ್ಟಿದ್ದಾರೆ.
ಹೀಗೆ ಸಾಹಿತ್ಯ, ಭಾಷೆ, ಕಾವ್ಯ, ಸಂಸ್ಕೃತಿ ಮತ್ತು ಸಾಮಾಜಿಕತೆ ವಿಷಯಗಳನ್ನು ಕುರಿತು ಭರಪೂರವಾದ ಸಾಹಿತ್ಯ ಭಂಡಾರವನ್ನು ಪತ್ರಿಕೆಗಳಲ್ಲಿ ಹಂಚಿ ಮತ್ತು ಅವುಗಳನ್ನು ಸೊಗಸಾದ ಶೀರ್ಷಿಕೆ "ಹೇಮೆಯ ಮಡಿಲಲ್ಲಿ" ಹೂರಣವಾಗಿಸಿ ಓದುಗರ ವಾಚನಾಭಿರುಚಿಯನ್ನು ತಣಿಸಲು ಕೊಟ್ಟಿದ್ದಾರೆ. ಈ ಕೃತಿಗೆ ಹಾಸನದ ಹಿರಿಯ ಕವಿಗಳಾದ ಶ್ರೀ ಎನ್.ಎಲ್ ಚನ್ನೇಗೌಡರು ತಮ್ಮ ವಿದ್ವತ್ಪೂರ್ಣವಾಗಿ ಮುನ್ನುಡಿ ಆಡಿರುವುದು ಮತ್ತು ಲೇಖಕರಾದ ಶ್ರೀ ನಿಡಿಗೆರೆ ಕೃಷ್ಣಯ್ಯಂಗಾರ್ ಅವರು ಬೆನ್ನುಡಿಯ ಮೂಲಕ ಪ್ರೋತ್ಸಾಹ ನೀಡಿರುವುದು ಕೃತಿಯ ತೂಕವನ್ನು ಹೆಚ್ಚಿಸಿದಂತಾಗಿದೆ. ಸದಾ ಒಂದಿಲ್ಲೊಂದು ಲೇಖನ, ಕಾವ್ಯ, ನಾಟಕ, ವಿಮರ್ಶೆ, ಕಮ್ಮಟ, ಕವಿಗೋಷ್ಠಿ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗೊರೂರು ಅನಂತರಾಜು ಅವರ ದೈಹಿಕ ವಯಸ್ಸು ಅರವತ್ತರ ಕಡೆಗೆ ಸಾಗುತ್ತಿದ್ದರೂ ಮಾನಸಿಕ ವಯಸ್ಸು ಇನ್ನೂ ಮೂವತ್ತರಲ್ಲಿಯೇ ಇರುವುದು ಅವರ ಕ್ರಿಯಾಶೀಲ ಮನಸ್ಥಿತಿಯನ್ನು ಬಿಂಬಿಸುತ್ತದೆ. ಹೀಗೆ ನಿರಂತರವಾಗಿ ಸಾಹಿತ್ಯ ಲೋಕದಲ್ಲಿ ವಿಹರಿಸುತ್ತ, ವಿಜೃಭಿಸುತ್ತ ಕಿರಿಯ ಬರಹಗಾರರಿಗೆ ಮಾರ್ಗದರ್ಶನ ನೀಡುತ್ತ , ಇನ್ನೂ ಹಲವಾರು ಕೃತಿ ರತ್ನಗಳನ್ನು ಓದುಗರ ಕರಗಳಿಗೀಯುತ್ತ, ನೂರು ವರ್ಷಗಳು ಸಾಹಿತ್ಯ ಸರಸ್ವತಿಯ ಉಪಾಸನೆ ಗೈಯಲೆಂದು ಹಾರೈಸೋಣ.
~~~~~~~
~✍🏼 ಹೊ.ರಾ.ಪರಮೇಶ್ ಹೊಡೇನೂರು
ಶಿಕ್ಷಕ ಸಾಹಿತಿ, @ ರುದ್ರಪಟ್ಟಣ
ಸುಮಾರು ಮೂವತ್ತೈದು ವರ್ಷಗಳ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ವೈವಿಧ್ಯಮಯ ಪ್ರಕಾರದ ಸಾಹಿತ್ಯದ ಬೆಳೆಗಳನ್ನು ಯಶಸ್ವಿಯಾಗಿ ಬೆಳೆದು ಸಹೃದಯರಿಗೆ ಪ್ರೀತಿಯಿಂದ ಉಣಬಡಿಸುವ ಮೂಲಕ ಸಾಹಿತ್ಯ ಚರಿತ್ರೆಯಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಹಾಸನ ಭಾಗದ ಸಾಹಿತಿಗಳ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನ ಪಡೆದವರಲ್ಲೊಬ್ಬರಾಗಿದ್ದಾರೆ. ೧೯೬೧ ರ ಮೇ ೧೩ ರಂದು ಬಸವರಾಜು ಮತ್ತು ಪುಟ್ಟ ಲಕ್ಷ್ಮಮ್ಮ ದಂಪತಿಗಳ ಪುಣ್ಯ ಗರ್ಭದಲ್ಲಿ ಜನಿಸಿದ ಅನಂತರಾಜು ಅವರು ಹುಟ್ಟೂರಿನ ಹಸಿರು ಸಿರಿ ಸಮೃದ್ಧವಾದ ಪರಿಸರದಲ್ಲಿ ಆಡಿ ಬೆಳೆದವರು. ಸೂಕ್ಷ್ಮ ಗ್ರಾಹಿ ಪ್ರವೃತ್ತಿಯವರಾದ ಇವರು ತಮ್ಮ ಊರಿನ ಜನಜೀವನದ ಅವಲೋಕನದ ಜೊತೆಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು, ಹಳ್ಳಿಗರ ಹವ್ಯಾಸಿ ನಾಟಕಗಳನ್ನು ನೋಡುತ್ತಾ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಾಹಿತ್ಯಾಸಕ್ತಿಯನ್ನು ಮೈಗೂಡಿಸಿಕೊಂಡವರು. ಉತ್ತಮ ಪುಸ್ತಕಗಳನ್ನು ಓದುವ ಅಧ್ಯಯನ ಮಾಡುವ ಮತ್ತು ಆಯಾ ಪುಸ್ತಕಗಳ ಹೂರಣವನ್ನು ತಮ್ಮದೇ ದೃಷ್ಟಿಕೋನದಿಂದ ಪರಾಮರ್ಶಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡ ಪರಿಣಾಮವಾಗಿ ಅನೇಕ ಲೇಖನಗಳನ್ನು ಬರೆಯುವಲ್ಲಿ ಯಶಸ್ಸು ಕಂಡರು. ಜೊತೆಗೆ ನಾಡಿನ ಅನೇಕ ಪ್ರಮುಖ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನೂರಾರು ವೈವಿಧ್ಯಮಯ ಬರಹಗಳನ್ನು ಸಹೃದಯರಿಗೆ ನೀಡಿ ಮನೆ ಮಾತಾದರು. ವಿಶೇಷವಾಗಿ ನಾಟಕ ರಂಗದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಅನಂತರಾಜು ಅವರು ಹಾಸನದ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳುವ ಯಾವುದೇ ಪ್ರಕಾರದ ನಾಟಕವಿದ್ದರೂ ತಪ್ಪದೆ ಹಾಜರಾಗಿ, ತಮ್ಮ ಸೂಕ್ಷ್ಮ ಅವಲೋಕನದಿಂದ ವೀಕ್ಷಿಸುವ ಜೊತೆಗೆ ಪ್ರದರ್ಶನಗೊಂಡ ನಾಟಕ ಮತ್ತು ಪಾತ್ರಧಾರಿಗಳನ್ನು ಕುರಿತು ಲೇಖನವಾಗಿಸಿ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಪ್ರೋತ್ಸಾಹ ತುಂಬುತ್ತಾರೆ. ಅಂತಹ ಉದಾತ್ತ ಮನಸ್ಸಿನ, ಕಾವ್ಯ ಪ್ರಿಯರಾದ ಇವರು
ಇದುವರೆಗೂ ಮೂವತ್ತೈದಕ್ಕಿಂತ ಹೆಚ್ಚು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಗೊರೂರು ಅನಂತರಾಜು ಅವರ ಮೌಲಿಕವಾದ ಕೃತಿಗಳಲ್ಲಿ ಒಂದಾದ "ಹೇಮೆಯ ಮಡಿಲಲ್ಲಿ" ಪುಸ್ತಕವನ್ನು ಕುರಿತಂತೆ ಕಿರು ಲೇಖನವಿದು.
"ಹೇಮೆಯ ಮಡಿಲಲ್ಲಿ" ಗೊರೂರು ಅನಂತರಾಜು ಅವರು ಬರೆದ, ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಂಡ ಒಟ್ಟು ೨೦ ಲೇಖನಗಳು ಅಡಕವಾಗಿವೆ. ಪ್ರತಿ ಲೇಖನವು ವೈವಿಧ್ಯಮಯ ವಿಷಯ ವಸ್ತುವನ್ನು ಹೊಂದಿದ್ದು, ವಿಶೇಷವಾಗಿ ಮಾತೃ ಜಿಲ್ಲೆಯ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ನಾಟಕ, ಜಾನಪದ, ಇತಿಹಾಸ ವೈಶಿಷ್ಟ್ಯತೆ ಮತ್ತು ವ್ಯಕ್ತಿ ಸಾಧನೆ ಮುಂತಾದ ಅನೇಕ ವಸ್ತುಗಳನ್ನು ಹೊಂದಿವೆ. ತಮ್ಮ ಮೊದಲ ಲೇಖನ "ಹೇಮೆಯ ಮಡಿಲಲ್ಲಿ' ಶೀರ್ಷಿಕೆಯನ್ನೇ ಕೃತಿಗೂ ಹೆಸರಿಸುವ ಮೂಲಕ ತಮ್ಮ ಜನ್ಮಭೂಮಿಯನ್ನು ಅತ್ಯಂತ ಪ್ರೀತಿಯಿಂದ ಸ್ಮರಿಸಿಕೊಂಡಿದ್ದಾರೆ. ಇದೇ ಲೇಖನದಲ್ಲಿ ಹೇಮಾವತಿ ನದಿಯ ಉಗಮ, ಅಣೆಕಟ್ಟಿನ ನಿರ್ಮಾಣ, ಅನುಕೂಲತೆ ಪಡೆದಿರುವ ಜಲಾನಯನ ಪ್ರದೇಶದ ವ್ಯಾಪ್ತಿ ಮುಂತಾದ ಅನೇಕ ಮಾಹಿತಿಗಳನ್ನು ಕರಾರುವಕ್ಕಾದ ಅಂಕಿಅಂಶಗಳೊಂದಿಗೆ ವಿವರಿಸಿರುವುದು ಅಧ್ಯಯನ ಪ್ರಿಯರಿಗೆ ಸುಲಭವಾಗಿ ದೊರಕುವ ಸರಕಿನಂತಾಗಿದೆ. ಜೊತೆಗೆ ಗೊರೂರಿನ ಐತಿಹಾಸಿಕ ಕುರುಹುಗಳು, ದೇವಾಲಯಗಳು, ಕೋಟೆಗಳು ಹಾಗೂ ರಾಮಸ್ವಾಮಿ ಅಯ್ಯಂಗಾರ್ ಅವರನ್ನು ಒಳಗೊಂಡಂತೆ ಇಲ್ಲಿನ ಸಾಹಿತ್ಯ ಸಾಧಕರನ್ನು ಸಂಕ್ಷಿಪ್ತವಾಗಿ ಉಲ್ಲೇಖಿಸಿದ್ದಾರೆ.
"ಹಾಸನ ಜಿಲ್ಲೆಯ ಜಾನಪದ ಅಧ್ಯಯನ:ಗುರುಮುಖ" ಲೇಖನದಲ್ಲಿ ಕನ್ನಡ ಪ್ರಾಧ್ಯಾಪಕರೂ, ಖ್ಯಾತ ಜಾನಪದ ವಿದ್ವಾಂಸರೂ ಆದ ಡಾ.ಹಂಪನಹಳ್ಳಿ ತಿಮ್ಮೇಗೌಡರ ಪಿಹೆಚ್ಡಿ ನಿಬಂಧದ ಪ್ರಮುಖ ಅಂಶಗಳನ್ನು ಒಳಗೊಂಡಂತೆ ಹಾಸನ ಭಾಗದ ಜಾನಪದ ಅಂಶಗಳು, ಕಲಾವಿದರು, ಕಲಾಪ್ರಕಾರಗಳೆಲ್ಲವನ್ನೂ ಸಾಂದರ್ಭಿಕವಾದ ಜನಪದ ಗೀತೆಗಳು, ಖ್ಯಾತ ಲೇಖಕರು ಬರೆದ ಜಾನಪದ ಕೃತಿಗಳ ಉಲ್ಲೇಖದೊಂದಿಗೆ ಸಮಗ್ರವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ.
"ಪಂಡಿತ ಸ್ವಾಮಿಗೌಡರ ಸಾಹಿತ್ಯ ಕೊಡುಗೆ" ಲೇಖನದಲ್ಲಿ ಆಲೂರು ತಾಲ್ಲೂಕಿನ ಪೊನ್ನಾಥಪುರ ದಾಸೇಗೌಡನ ಕೊಪ್ಪಲು ಗ್ರಾಮ ಸಂಜಾತ ಸಾಹಿತಿ ಸ್ವಾಮಿಗೌಡರ ಅಮೋಘ ಸಾಹಿತ್ಯಕ ಕೊಡುಗೆಯನ್ನು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ. ೧೯೭೨ ರಲ್ಲಿ ಅವರು ಸಂಪಾದಿಸಿದ ಇವರ 'ಸೋಬಾನೆ ಪದಗಳು' ಹಾಸನ ಜಿಲ್ಲೆಯ ಮೊದಲ ಸೋಬಾನೆ ಪದಗಳ ಸಂಗ್ರಹ ಕೃತಿ ಇದಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಸ್ವಾಮಿಗೌಡರು ಸಂಪಾದಿಸಿದ ಜಾನಪದ ಸಂಪ್ರದಾಯದ ಹಾಡುಗಳ ಬಗ್ಗೆಯೂ ವಿವರಿಸಿದ್ದಾರೆ.
ನಮ್ಮ ನಾಡನ್ನು ಆಳಿದ ಅನೇಕ ರಾಜವಂಶಗಳಲ್ಲಿ ಹಾಸನ ಜಿಲ್ಲೆಯ ಕೀರ್ತಿಯನ್ನು ಅಜರಾಮರಗೊಳಿಸಿದ ಹೊಯ್ಸಳ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ ಸಾಹಿತ್ಯಕ್ಕೆ ನೀಡಿದ ಹಲವಾರು ಕೊಡುಗೆಗಳನ್ನು 'ಹೊಯ್ಸಳ ಕಾಲದ ಸಾಹಿತ್ಯ' ಲೇಖನದಲ್ಲಿ ವಿವರವಾಗಿ ತಿಳಿಸಿಕೊಟ್ಟು ಇತಿಹಾಸ ಪ್ರಿಯರಿಗೆ ಒಳ್ಳೆಯ ಹಿಮ್ಮಾಹಿತಿಯನ್ನು ಒದಗಿಸಿರುವ ಅನಂತರಾಜು ಅವರು ಹೊಯ್ಸಳ ದೊರೆಗಳ ಸಾಹಿತ್ಯದ ಬಗೆಗಿನ ಕಾಳಜಿಯನ್ನು ಓದುಗರಿಗೆ ತಿಳಿಸಿಕೊಟ್ಟಿದ್ದಾರೆ. ಮುಂದೆ ರಾಮನಾಥಪುರ ಬೇಲೂರು ಹಳೇಬೀಡು ಶ್ರವಣಬೆಳಗೊಳ ದಂತದಂತಹ ಶಿಲ್ಪಕಲೆಗಳಿಂದ ಕರ್ನಾಟಕದ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿರುವ ಬಡವರ ಊಟಿ, ಸಿಂಹಾಸನಪುರಿ ಎಂಬ ಅನ್ವರ್ಥಕ ನಾಮ ವಿಶೇಷಣವನ್ನು ಪಡೆದ ಹಸನಾದ 'ಹಾಸನ' ಜಿಲ್ಲೆಯ ವಿವಿಧ ತಾಲ್ಲೂಕುಗಳ ಶಿಲ್ಪ ಕಲಾವೈಭವದ ಸವಿಸ್ಮರಣೆಗಳನ್ನು "ಶಿಲ್ಪಕಲೆಯ ನಾಡಿನಲ್ಲಿ" ಎಂಬ ಲೇಖನದಲ್ಲಿ ನಿರೂಪಿಸಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಹರಿಯುವ ಕಾವೇರಿ, ಹೇಮಾವತಿ, ಯಗಚಿ, ವಾಟೆಹೊಳೆ ನದಿಗಳ ಹರಿವಿನ ವಿಸ್ತಾರ, ಉಪಯೋಗ ಪಡೆಯುತ್ತಿರುವ ಕೃಷಿ ಜಮೀನುಗಳ ವಿಸ್ತೀರ್ಣ, ಕೃಷಿಯೇತರ ಬಳಕೆಯ ಮಾಹಿತಿಗಳೆಲ್ಲವನ್ನು ನಿಖರವಾಗಿ ದಾಖಲಿಸಿದ್ದಾರೆ. ಅಲ್ಲದೆ ಸಂಗೀತ ಪರಂಪರೆಯ ಹಿನ್ನೆಲೆಯಲ್ಲಿ 'ಕರ್ನಾಟಕದ ತಂಜಾವೂರು' ಎಂಬ ಖ್ಯಾತಿಗೆ ಪಾತ್ರವಾಗಿರುವ ಅರಕಲಗೂಡು ತಾಲ್ಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಹುಟ್ಟಿ ಶಾಸ್ತ್ರೀಯ ಸಂಗೀತದ ಸಾಧನೆಯಲ್ಲಿ ಮಹತ್ಸಾಧನೆ ಗೈದಿರುವ ಶತಾವಧಾನಿ ವೆಂಕಟರಮಣಯ್ಯ, ಆರ್. ಕೆ.ಶ್ರೀಕಂಠನ್, ಆರ್. ಕೆ.ತ್ಯಾಗರಾಜನ್, ಆರ್. ಕೆ.ತಾರಾನಾಥನ್, ಆರ್. ಡಾ. ಎನ್. ಶ್ರೀಲತಾ.... ಮುಂತಾದವರ ಸಂಗೀತ ಸೇವೆಯನ್ನು ಸ್ಮರಿಸಿಕೊಂಡಿದ್ದಾರೆ. ಇದೇ ಗ್ರಾಮದಲ್ಲಿ ಸಂಗೀತ ಪರಂಪರೆಯನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿರುವ, ವಿಶ್ವ ವಿಖ್ಯಾತ ಕಲಾಕೃತಿ 'ಸಪ್ತಸ್ವರ ದೇವತಾ ಧ್ಯಾನ ಮಂದಿರ' ಮತ್ತು ಇತ್ತೀಚಿನ 'ದ್ವಾದಶ ಸ್ವರಸ್ತಂಭ ಮಂಟಪ'ದ ನಿರ್ಮಾಣದ ಜೊತೆಗೆ ಪ್ರತಿ ವರ್ಷವೂ 'ಸಂಗೀತೋತ್ಸವ'ವನ್ನು ಯಶಸ್ವಿಯಾಗಿ ನಡೆಸುತ್ತಿರುವ ಗಾನಕಲಾಭೂಷಣ ಡಾ.ಆರ್. ಕೆ.ಪದ್ಮನಾಭ ಅವರನ್ನು ಸ್ಮರಿಸಿಕೊಳ್ಳುವುದು ಅತ್ಯಂತ ಸಮಂಜಸವಾಗುತ್ತದೆ.
ಕರ್ನಾಟಕ ರತ್ನ ಡಾ. ದೇಜಗೌ ಶತಮಾನೋತ್ಸವ ಸಂದರ್ಭದ ಅಭಿನಂದನಾ ಗ್ರಂಥದ ಕೃತಿಯೊಂದರ ಪರಿಚಯ ಲೇಖನವಾಗಿ "ದೇಜಗೌ ನೆನಪಿನಾಳದಲಿ ನಿಂದವರು" ಬರೆಯುವ ಸುವರ್ಣಾವಕಾಶ ಪಡೆದ ಗೊ.ಅನಂತರಾಜು ಅವರು ದೇಜಗೌ ಅವರು ಬರೆದ ವಿವಿಧ ಕ್ಷೇತ್ರಗಳ ಸಾಧಕ ಮಹಿಮರನ್ನು ಕುರಿತ ವ್ಯಕ್ತಿ ಚಿತ್ರಣಗಳ ಲೇಖನಗಳನ್ನು ಕುರಿತು ಸವಿಸ್ತಾರವಾಗಿ ಬರೆದು ಕೃತಾರ್ಥ ಭಾವ ತಳೆದಿದ್ದಾರೆ. ಮುಂದಿನ ಲೇಖನ 'ಜಲಪ್ರಳಯ-ಭಗೀರಥನ ಕತೆ'ಯಲ್ಲಿ ಭಗೀರಥನು ಭೂಲೋಕಕ್ಕೆ ಗಂಗೆಯನ್ನು ಕರೆತರುವ ಪ್ರಸ್ತಾವನೆಯೊಂದಿಗೆ ಹಿಮಾಲಯದ ಪರ್ವತಶ್ರೇಣಿಯಿಂದ ಹರಿಯುವ ನದಿಗಳು, ಅವುಗಳ ಹರಿವಿನ ವಿಸ್ತಾರ ಮತ್ತು ನದೀಪಾತ್ರಗಳಲ್ಲಿರುವ ಪುಣ್ಯ ಕ್ಷೇತ್ರಗಳ ಹಲವಾರು ಮಾಹಿತಿಗಳನ್ನು ಒದಗಿಸಿದ್ದಾರೆ. ಗೊರೂರು ಸೋಮಶೇಖರ್ ಅವರ ಬಡವರ್ಗಗಳು ಒಂದು ಸಂವಾದ ಸೇರಿದಂತೆ ಸಮಾಜದ ಅನೇಕ ಸಮಸ್ಯೆಗಳ, ಪ್ರಶ್ನಾರ್ಥಕ ವಿಷಯಗಳನ್ನು ಒಳಗೊಂಡ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ ಕೃತಿ ಬಸವಣ್ಣನ ಪುರಾತ ದಾಸಿಮಯ್ಯ - ಕೆಳವರ್ಗದ ತಲ್ಲಣಗಳು ಎಂಬ ಲೇಖನವನ್ನು ಕುರಿತು ವಿಮರ್ಶಿಸಿದ್ದಾರೆ.
ಇಂತಹ ಅನೇಕ ಮೌಲಿಕ ಲೇಖನಗಳ ಸಾಹಿತ್ಯ ಸವಿಭರಿತ ಗೊಂಚಲಿನಲ್ಲಿ 'ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ', 'ಬೇಲೂರು ವೈಕುಂಠ ದಾಸರು ಮತ್ತು ಕೆಲ್ಲಂಗೆರೆ ತಿಮ್ಮಪ್ಪದಾಸರು', ಗಾನಕೋಗಿಲೆ- ಎಸ್. ಜಾನಕಿ', 'ಜಾನಪದ ಹಾಡುಗಳಲ್ಲಿ ಕಬ್ಬತ್ತಿರಂಗ- ಭರತೂರು ಬಿಂದಿಗಮ್ಮ', 'ಜನಪದ ಸಾಹಿತ್ಯದಲ್ಲಿ ಮಳಲಿ ಗಿಡ್ಡಮ್ಮ' ಮುಂತಾದ ಮಹಾ ಸಾಧಕರ ಸಾಧನೆಯ ಮಜಲುಗಳನ್ನು ವಿವರವಾಗಿ ಪರಿಚಯಿಸುವ ಮೂಲಕ ಓದುಗರ ಆಸಕ್ತಿಗೆ ಅನುಗುಣವಾದ ಸಾಹಿತ್ಯ ಸೌರಭವನ್ನು ಹಂಚಿದ್ದಾರೆ. ಇವುಗಳ ಜೊತೆಗೆ 'ಹೊಯ್ಸಳ ಚಿತ್ರಕ್ಕೆ ರಿಯಲ್ ಹುಲಿ' ಲೇಖನದಲ್ಲಿ ನಿರ್ದೇಶಕರಾದ ಸಿ.ವಿ.ಶಿವಶಂಕರ್ ಅವರು ಹೊಯ್ಸಳ ಚಿತ್ರದಲ್ಲಿ ಸಳನು ಹುಲಿಯೊಂದಿಗೆ ಹೋರಾಡುವ ದೃಶ್ಯದ ಚಿತ್ರೀಕರಣಕ್ಕಾಗಿ ಮದರಾಸಿನಿಂದ ನಿಜವಾದ ಹುಲಿಯನ್ನು ತರಿಸಿ, ಅನುಭವಿಸಿದ ರೋಮಾಂಚನಕಾರಿ ಪ್ರಸಂಗವನ್ನು ತಿಳಿಸಿದ್ದಾರೆ. ಖ್ಯಾತ ಪತ್ರಕರ್ತರಾದ ನಾಗರಾಜ್ ಹೆತ್ತೂರ್ ಅವರ 'ಮನೆಯಲ್ಲಿ ಅಟ್ಟೆನೆಂದಡೆ ಹೊಟ್ಟೆ ತುಂಬಿದುದುಂಟೆ?' ಲೇಖನವನ್ನು ಕುರಿತು ವಿವರಿಸಿರುವ ಗೊ.ಅನಂತರಾಜು ಅವರು ಪೌರಕಾರ್ಮಿಕ ಪುನೀತ್ ಅವರ ಸೇವೆಯ ಸ್ಮರಣೆಯೊಂದಿಗೆ ನಮ್ಮ ಜನಸಾಮಾನ್ಯರಲ್ಲಿ ಜಡ್ಡುಗಟ್ಟಿರುವ ನೈರ್ಮಲ್ಯದ ನಿಷ್ಕಾಳಜಿ, ಶೌಚಾಲಯ ನಿರ್ವಹಣೆಯ ಬಗೆಗಿನ ಅಲಕ್ಷ್ಯ, ಸುತ್ತ ಮುತ್ತಲಿನ ಪರಿಸರ ಪ್ರಜ್ಞೆಯ ಕೊರತೆಗಳಿಂದಾಗಿ ಪೌರಕಾರ್ಮಿಕರು ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕೆಂಬ ಬಗೆಗಿನ ನಾಗರಾಜ್ ಹೆತ್ತೂರರ ಮಾನವೀಯ ಕಳಕಳಿ ಹಾಗೂ ಸಾಮಾಜಿಕ ಅಸಮಾನತೆಯ ಜಿಜ್ಞಾಸೆಯನ್ನು ಬಿಚ್ಚಿಟ್ಟಿದ್ದಾರೆ.
ಹೀಗೆ ಸಾಹಿತ್ಯ, ಭಾಷೆ, ಕಾವ್ಯ, ಸಂಸ್ಕೃತಿ ಮತ್ತು ಸಾಮಾಜಿಕತೆ ವಿಷಯಗಳನ್ನು ಕುರಿತು ಭರಪೂರವಾದ ಸಾಹಿತ್ಯ ಭಂಡಾರವನ್ನು ಪತ್ರಿಕೆಗಳಲ್ಲಿ ಹಂಚಿ ಮತ್ತು ಅವುಗಳನ್ನು ಸೊಗಸಾದ ಶೀರ್ಷಿಕೆ "ಹೇಮೆಯ ಮಡಿಲಲ್ಲಿ" ಹೂರಣವಾಗಿಸಿ ಓದುಗರ ವಾಚನಾಭಿರುಚಿಯನ್ನು ತಣಿಸಲು ಕೊಟ್ಟಿದ್ದಾರೆ. ಈ ಕೃತಿಗೆ ಹಾಸನದ ಹಿರಿಯ ಕವಿಗಳಾದ ಶ್ರೀ ಎನ್.ಎಲ್ ಚನ್ನೇಗೌಡರು ತಮ್ಮ ವಿದ್ವತ್ಪೂರ್ಣವಾಗಿ ಮುನ್ನುಡಿ ಆಡಿರುವುದು ಮತ್ತು ಲೇಖಕರಾದ ಶ್ರೀ ನಿಡಿಗೆರೆ ಕೃಷ್ಣಯ್ಯಂಗಾರ್ ಅವರು ಬೆನ್ನುಡಿಯ ಮೂಲಕ ಪ್ರೋತ್ಸಾಹ ನೀಡಿರುವುದು ಕೃತಿಯ ತೂಕವನ್ನು ಹೆಚ್ಚಿಸಿದಂತಾಗಿದೆ. ಸದಾ ಒಂದಿಲ್ಲೊಂದು ಲೇಖನ, ಕಾವ್ಯ, ನಾಟಕ, ವಿಮರ್ಶೆ, ಕಮ್ಮಟ, ಕವಿಗೋಷ್ಠಿ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗೊರೂರು ಅನಂತರಾಜು ಅವರ ದೈಹಿಕ ವಯಸ್ಸು ಅರವತ್ತರ ಕಡೆಗೆ ಸಾಗುತ್ತಿದ್ದರೂ ಮಾನಸಿಕ ವಯಸ್ಸು ಇನ್ನೂ ಮೂವತ್ತರಲ್ಲಿಯೇ ಇರುವುದು ಅವರ ಕ್ರಿಯಾಶೀಲ ಮನಸ್ಥಿತಿಯನ್ನು ಬಿಂಬಿಸುತ್ತದೆ. ಹೀಗೆ ನಿರಂತರವಾಗಿ ಸಾಹಿತ್ಯ ಲೋಕದಲ್ಲಿ ವಿಹರಿಸುತ್ತ, ವಿಜೃಭಿಸುತ್ತ ಕಿರಿಯ ಬರಹಗಾರರಿಗೆ ಮಾರ್ಗದರ್ಶನ ನೀಡುತ್ತ , ಇನ್ನೂ ಹಲವಾರು ಕೃತಿ ರತ್ನಗಳನ್ನು ಓದುಗರ ಕರಗಳಿಗೀಯುತ್ತ, ನೂರು ವರ್ಷಗಳು ಸಾಹಿತ್ಯ ಸರಸ್ವತಿಯ ಉಪಾಸನೆ ಗೈಯಲೆಂದು ಹಾರೈಸೋಣ.
~~~~~~~
~✍🏼 ಹೊ.ರಾ.ಪರಮೇಶ್ ಹೊಡೇನೂರು
ಶಿಕ್ಷಕ ಸಾಹಿತಿ, @ ರುದ್ರಪಟ್ಟಣ
ಸಾಹಿತಿ ಗೊರೂರು ಅನಂತರಾಜುರವರು ಬರೆದಿರುವ ಪುಸ್ತಕ ಮತ್ತು ಲೇಖನಗಳು